ಇರುಳು

ರಾತ್ರಿ ಬಯಲಿನಲ್ಲಿ ಚಂದ್ರನ
ಬೆಳಕಿರಲಿಲ್ಲ ಬಾನಿನಲ್ಲಿ ಬರೀ ನಕ್ಷತ್ರಗಳು
ಕಪ್ಪಾದ ನೆರಳು ಕ್ಷಿತಿಜದ ತುಂಬ
ಮತ್ತೆ ಸಂದೇಹ ನರಳಿಕೆಗಳು ಒದ್ದಾಡುತ್ತಿದ್ದವು.

ಕಣ್ಣು ಮುಚ್ಚಿದ ಸೂರ್ಯ ಕನಸಿನಲ್ಲಿ
ತಾರೆಗಳು ಮಹಾಮನೆಯ ಬೆಳಕು ಚೆಲ್ಲಿ
ಮುಗಿಲು ಹರಿದ ದಾರಿ ತುಂಬ ಕನಸುಗಳು
ಮತ್ತೆ ಮೈಯ ಹೊದ್ದ ಚಾದರು ಮುದುಡಿಕೊಂಡಿತ್ತು.

ಅರಮನೆಯ ಅಂಗಳದಲಿ ಪ್ರೀತಿ
ಹುಟ್ಟಿ ಹಾಲೆರೆಯುವ ಪಾಣಿಗ್ರಹಣ
ಕತ್ತಲೆಯ ಒಡ್ಡೋಲಗದಲ್ಲಿ ಸೀರೆ
ಸೆಳೆದುಕೊಂಡ ದ್ರೌಪತಿ ಬತ್ತಲಾದಳು.

ಸುಟ್ಟ ಗಾಯಗಳ ಆಕಾಶ ಪರ್ವ
ಚೆಲ್ಲಿಕೊಂಡ ಮನಸ್ಸುಗಳ ಅಗರ
ಯಾರು ಪೊರೆದರೋ ಇರಿದರೋ
ಕಣ್ಣು ಕಕ್ಷೆಯ ಬೆಳಕು ಕಳೆದುಕೊಂಡ ಗಾಂಧಾರ.

ಕತ್ತಲಿಗೆ ಒಂದು ಶಕ್ತಿ ನಿಗೂಢ
ಬೆಳಕಿನಲಿ ಆಗದ ಕೆಲಸಗಳು
ಒಳಗೊಳಗೆ ಹೊತ್ತಿ ಉರಿವ ಭೂತ ಭಯ
ಲಜ್ಜೆದಾಟದ ಕಣ್ಣು ಮುಚ್ಚಿದ ಕೌ ನೆರಳು ಇರುಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಗಿಲೆಯ ಪಾಡು
Next post ನವ್ಯಕಲಾಕೃತಿ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys